SLIDE1

This is default featured slide 1 title

Go to Blogger edit html and find these sentences.Now replace these sentences with your own descriptions.

This is default featured slide 2 title

Go to Blogger edit html and find these sentences.Now replace these sentences with your own descriptions.

This is default featured slide 3 title

Go to Blogger edit html and find these sentences.Now replace these sentences with your own descriptions.

This is default featured slide 4 title

Go to Blogger edit html and find these sentences.Now replace these sentences with your own descriptions.

This is default featured slide 5 title

Go to Blogger edit html and find these sentences.Now replace these sentences with your own descriptions.

Friday, November 27, 2020

NTSE 2020 : QUESTION PAPER AND KEY ANSWERS PAPER - II : ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳು ಪತ್ರಿಕೆ - II

 NTSE 2020 : QUESTION PAPER AND KEY ANSWERS PAPER - II : ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳು ಪತ್ರಿಕೆ - II



ನವೆಂಬರ್‌ 2019 ರಲ್ಲಿ ನಡೆದ NTSE ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಮತ್ತು ಮಾದರಿ ಉತ್ತರಗಳನ್ನು ( ಕೀ ಉತ್ತರಗಳು) ರಾಜ್ಯದ ಅಧಿಕೃತ ವೆಬ್‌ಸೈಟ್‌ ನಿಂದ ಪಡೆದು ಇಲ್ಲಿ ನೀಡಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು NTSE ಪರೀಕ್ಷೆಯನ್ನು ಯಾವುದೇ ಆತಂಕ ವಿಲ್ಲದೆ ಬರೆಯಲು ಇದು ನಿಮಗೆ ಸಹಾಯಕಾರಿಯಾಗಿದೆ.

 Please visit website for download the Question Paper and Key answers CLICK HERE 

NTSE SAT - 2019  : SCHOLASTIC APTITUDE TEST  PAPER - II 


KEY ANSWERS PAPER - II 


Thursday, November 26, 2020

NTSE 2020 : NTSE EXAM QUESTION PAPER AND KEY ANSWERS : ಪ್ರಶ್ನೆ ಪತ್ರಿಕೆಗಳು ಮತು ಕೀ ಉತ್ತರಗಳು

 NTSE 2020 : NTSE EXAM QUESTION PAPER AND KEY ANSWERS :   ಪ್ರಶ್ನೆ ಪತ್ರಿಕೆಗಳು ಮತು ಕೀ ಉತ್ತರಗಳು


ನವೆಂಬರ್‌ 2019 ರಲ್ಲಿ ನಡೆದ NTSE ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಮತ್ತು ಮಾದರಿ ಉತ್ತರಗಳನ್ನು ( ಕೀ ಉತ್ತರಗಳು) ರಾಜ್ಯದ ಅಧಿಕೃತ ವೆಬ್‌ಸೈಟ್‌ ನಿಂದ ಪಡೆದು ಇಲ್ಲಿ ನೀಡಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು NTSE ಪರೀಕ್ಷೆಯನ್ನು ಯಾವುದೇ ಆತಂಕ ವಿಲ್ಲದೆ ಬರೆಯಲು ಇದು ನಿಮಗೆ ಸಹಾಯಕಾರಿಯಾಗಿದೆ.

Please visit the website for download the Question paper and Key answers CLICK HERE

GMAT (General Mental Ability Test) Question Paper - 1 




GMAT Key Answers - 1 

Tuesday, November 24, 2020

NMMS : User Manual For NMMS Application : ಅರ್ಜಿ ಸಲ್ಲಿಸುವ ವಿಧಾನ

 NMMS : User Manual For NMMS Application : ಅರ್ಜಿ ಸಲ್ಲಿಸುವ ವಿಧಾನ


2020 -21 ನೇ ಸಾಲಿನ  National Means - cum - Merit Scholarship  ಪರೀಕ್ಷೆಗೆ ONLINE ಮೂಲಕ ಅರ್ಜಿಗಳನ್ನು  ಸಲ್ಲಿಸಲು ಅನುಸರಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ.

For More Information Please Visit the Website Click here

NTSE : User Manual for NTSE Application : ಅರ್ಜಿ ಸಲ್ಲಿಸುವ ವಿಧಾನ

 NTSE : User Manual for NTSE Application : ಅರ್ಜಿ ಸಲ್ಲಿಸುವ ವಿಧಾನ
National Talent Search Examination - NTSE 

 2020 -21 ನೇ ಸಾಲಿನ  ರಾಷ್ಟ್ರೀಯ ಪ್ರತಿಭಾನ್ಚೇಷಣೆ ಪರೀಕ್ಷೆಗೆ ONLINE ಮೂಲಕ ಅರ್ಜಿಗಳನ್ನು  ಸಲ್ಲಿಸಲು ಅನುಸರಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ.

For more information Please visit the website click here

 

Saturday, November 21, 2020

ಕರ್ನಾಟಕ ಸರ್ಕಾರದಿಂದ 2021 - 22 ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ

 ಕರ್ನಾಟಕ ಸರ್ಕಾರದಿಂದ 2021 - 22 ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ 




ಕರ್ನಾಟಕ ಸರ್ಕಾರವು 2021 - 22 ರ ಸಾಲಿನ  ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ರಜಾ ದಿನಗಳು ಈ ಕೆಳಕಂಡತೆ ಇರುತ್ತವೆ.

Sunday, November 15, 2020

SpaceX : NASA ನಾಸಾದಿಂದ ಬಾಹ್ಯಾಕಾಶ ನಿಲ್ದಾಣಕ್ಕೆ 4 ಗಗನಯಾತ್ರಿಗಳ ಪ್ರಯಾಣ

 SpaceX : NASA ನಾಸಾದಿಂದ ಬಾಹ್ಯಾಕಾಶ ನಿಲ್ದಾಣಕ್ಕೆ 4 ಗಗನಯಾತ್ರಿಗಳ ಪ್ರಯಾಣ

image : NASA

ವಾಷಿಂಗ್ಟನ್, ನವೆಂಬರ್ 16: ಮೂವರು ಅಮೆರಿಕದ ಹಾಗೂ ಒಬ್ಬ ಜಪಾನ್ ಗಗನಯಾತ್ರಿಗಳು ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡ ನೌಕೆಯು ಅಮೆರಿಕದ ಫ್ಲೋರಿಡಾದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಹಾರಿದೆ. ಈ ತಂಡವು ಖಾಸಗಿ ಬಾಹ್ಯಾಕಾಶ ಕಂಪೆನಿ ಸ್ಪೇಸ್ ಎಕ್ಸ್ ಒದಗಿಸಿರುವ ರಾಕೆಟ್‌ ಮತ್ತು ಕ್ಯಾಪ್ಸೂಲ್‌ನಲ್ಲಿ ಸಾಗುತ್ತಿದೆ. ಅಮೆರಿಕದ ನಾಸಾಕ್ಕೆ ಈ ಕಂಪೆನಿಯು ಸೇವೆ ಒದಗಿಸುತ್ತಿರುವುದು ಇದು ಎರಡನೆಯ ಬಾರಿ. ಕೆಳ ಭೂಮಿ ಕಕ್ಷೆಗೆ ನಿರಂತರ ಗಗನಯಾತ್ರಿ ಪ್ರಯಾಣವನ್ನು ನಡೆಸುವ ಮೂಲಕ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೊಸ ಯುಗ ಸೃಷ್ಟಿಸಿದೆ. ಬಾಹ್ಯಾಕಾಶ ನಿಲ್ದಾಣಕ್ಕೆ ಅಮೆರಿಕದ ಮಿಖಾಯಲ್ ಹೋಪ್ಕಿನ್ಸ್, ವಿಕ್ಟರ್ ಗ್ಲೋವರ್ ಮತ್ತು ಶನಾನ್ ವಾಕರ್ ಹಾಗೂ ಜಪಾನ್‌ ಬಾಹ್ಯಾಕಾಶ ಸಂಸ್ಥೆಯ (ಜಕ್ಸಾ) ಬಹು ಅನುಭವಿ ಗಗನಯಾನಿ ಸೊಯಿಚಿ ನೊಗುಚಿ ಈ ಯಾನ ಕೈಗೊಂಡಿದ್ದಾರೆ.

ಜಪಾನ್‌ನ ಸೊಯಿಚಿ ನೊಗುಚಿ ಅವರು ಈ ಮೂಲಕ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಮೂರು ವಿಭಿನ್ನ ಬಾಹ್ಯಾಕಾಶ ವಾಹನಗಳ ಮೂಲಕ ಅವರು ಬಾಹ್ಯಾಕಾಶ ನಿಲ್ದಾಣಕ್ಕೆ ಭೂಮಿಯಿಂದ ತೆರಳಿದ ಕೇವಲ ಮೂರನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈ ಹಿಂದೆ ಅವರು ಸೊಯುಜ್ ಮತ್ತು ಶಟ್ಲ್ ಹಾರ್ಡ್‌ವೇರ್ ಮೂಲಕ ಪ್ರಯಾಣಿಸಿದ್ದರು.

ಫಾಲ್ಕನ್ ರಾಕೆಟ್ ಮತ್ತು ಡ್ರ್ಯಾಗನ್ ಕ್ಯಾಪ್ಸೂಲ್‌ನಲ್ಲಿ ಈ ತಂಡವು ಸೋಮವಾರ ಸ್ಥಳೀಯ ಕಾಲಮಾನ ರಾತ್ರಿ 7.27ರ ಸುಮಾರಿಗೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಹೊರಟಿತು. ಈ ತಂಡವು ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಲು ಒಂದು ದಿನಕ್ಕೂ ಹೆಚ್ಚು ಸಮಯ ಬೇಕಾಗಲಿದೆ. ಈ ತಂಡವು ನಾಸಾದ ಕೇಟ್ ರುಬಿನ್ಸ್ ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆಯ (ರೊಸ್ಕೊಸ್ಮೊಸ್) ಖಗೋಳಯಾನಿ ಸರ್ಜಿ ರಿಜಿಕೊವ್ ಹಾಗೂ ಸರ್ಜಿ ಕುಡ್ ಸ್ವೆರ್ಕೊವ್ ಅವರನ್ನು ಸೇರಿಕೊಳ್ಳಲಿದೆ.


 

SSLC MATHEMATICS PASSING PACKAGE - 2020

 SSLC MATHEMATICS PASSING PACKAGE - 2020

Thursday, November 12, 2020

TEACHER TRANSFER : 17 ಕ್ಕೆ ಶಿಕ್ಷಕರ ವರ್ಗಾವಣೆ ಪ್ರಾರಂಭ

 TEACHER TRANSFER : 17 ಕ್ಕೆ ಶಿಕ್ಷಕರ ವರ್ಗಾವಣೆ ಪ್ರಾರಂಭ



ಬಹುದಿನಗಳ ಕನಸಾಗಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಪ್ರಾರಂಭ ಮಾಡಲು ಶಿಕ್ಷಣ ಇಲಾಖೆ ನಿರ್ಧಸಿದೆ. ಇದರಿಂದ ಸರ್ಕಾರವು ಶಿಕ್ಷಕರಿಗೆ ದೀಪಾವಳಿಯ ಉಡುಗೊರೆ ನೀಡಿದೆ. ಹೊಸದಾಗಿ ಜಾರಿಗೆ ತಂದಿರುವ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ ) ಅಧಿನಿಯಮ 2020ರ ನಿಯಮದಂತೆ ಈ ವರ್ಗಾವಣೆ ಪ್ರಕ್ರಿಯೆಯು ನಡೆಯುತ್ತದೆ.
2019-20ನೇ ಸಾಲಿನಲ್ಲಿ ಕಡ್ಡಾಯ/ಹೆಚ್ಚುವರಿಯಾಗಿ ತಾಲೂಕು, ಜಿಲ್ಲೆಯಿಂದ ಹೊರಗೆ ವರ್ಗಾವಣೆ ಆಗಿರುವ ಸರ್ಕಾರಿ ಶಾಲಾ ಶಿಕ್ಷಕರಿಗೆ ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ಮೊದಲಿಗೆ ವರ್ಗಾವಣೆ ನೀಡಲು ಆದೇಶಿಸಲಾಗಿದೆ. ಇದರ ಜೊತೆಯಲ್ಲೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಕೂಡ ನವೆಂಬರ 17 ರಿಂದ ಆರಂಭವಾಗಲಿದೆ. ಶಿಕ್ಷಕಮಿತ್ರ ಆಪ್‌ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಯುವುದು ಮತ್ತೊಂದು ವಿಶೇಷವಾಗಿದೆ.

ಅರ್ಜಿ ಸಲ್ಲಿಕೆಯ ಕ್ರಮ ಮತ್ತು ಅರ್ಜಿ ಹೇಗೆ ಸಲ್ಲಿಸುವುದು.

  • ಶಿಕ್ಷಕರ ಕಾಯಂಪೂರ್ವ ಸೇವಾ ಅವಧಿ ತೃಪ್ತಿಕರವಾಗಿರಬೇಕು
  • ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಸೇವೆಸಲ್ಲಿಸುತ್ತಿರುವ ಶಿಕ್ಷಕರು ಆ ಪ್ರದೇಶದ ಹೋರಗೆ ವರ್ಗಾವಣೆ ಬಯಸಿದ್ದರೆ ಕನಿಷ್ಟ 10 ವರ್ಷ ಸೇವೆ ಸಲ್ಲಿಸಿರಬೇಕು
  • ವರ್ಗಾವಣೆಗೆ ಅರ್ಜಿ ಸಲ್ಲಿಸುವವರು ನಿಗದಿತ ದಿನಾಂಕದೊಳಗೆ ಶಿಕ್ಷಕಮಿತ್ರ/ ಇಇಡಿಸ್‌ ಮುಖಾಂತರ ಅರ್ಜಿ ಸಲ್ಲಿಸಬೇಕು
  • ಜಿಲ್ಲೆಯೊಳಗಿನ ಅಥವಾ ಒಂದು ಘಟಕದಿಂದ ಮತ್ತೊಂದು ಘಟಕಕ್ಕೆ ವರ್ಗಾವಣೆ ಬಯಸುವವರು ನಿಗದಿಪಡಿಸಿದ ಸೇವೆಯನ್ನು ಪೂರ್ಣಗೋಳಿಸಿರಬೇಕು.
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ನ್ನು ಕ್ಲಿಕ್‌ ಮಾಡಿ



Tuesday, November 10, 2020

X - ray : ಮೆಡಿಸಿನ್ ಇತಿಹಾಸ: ಡಾ. ರೋಂಟ್ಜೆನ್ಸ್ ಆಕ್ಸಿಡೆಂಟಲ್ ಎಕ್ಸ್-ರೇ

 X - ray  : ಮೆಡಿಸಿನ್ ಇತಿಹಾಸ: ಡಾ. ರೋಂಟ್ಜೆನ್ಸ್ ಆಕ್ಸಿಡೆಂಟಲ್ ಎಕ್ಸ್-ರೇ

Monday, November 9, 2020

School Reopening : ಶಾಲಾ - ಕಾಲೇಜು ಆರಂಭಕ್ಕೆ ಶಿಫಾರಸು

 School Reopening : ಶಾಲಾ - ಕಾಲೇಜು ಆರಂಭಕ್ಕೆ ಶಿಫಾರಸು

ನವೆಂಬರ್‌ 17 ರಿಂದ ಶಾಲಾ ಕಾಲೇಜು ಪ್ರಾರಂಬಿಸಲು ರಾಜ್ಯ ಸರ್ಕಾರಕ್ಕೆ ಶಿಕ್ಷಣ ಇಲಾಖೆ ಶಿಫಾರಸು ಮಾಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಶ್ರೀ ಅನ್ಬುಕುಮಾರ ಅವರ ಸೋಮವಾರ ಇಲಾಖೆಯ ಪ್ರಧಾನ ಕರ್ಯದರ್ಶಿಯವರಿಗೆ ವರದಿ ಸಲ್ಲಿಸಿದ್ದಾರೆ. 10ನೇ ಮತ್ತು 12ನೇ ತರಗತಿಗಳು ವಿದ್ಯಾರ್ಥಿಗಳ ಜೀವನದ ಮುಖ್ಯ ಘಟವಾಗಿರುವುದರಿಂದ 9 ರಿಂದ 12ನೇ ವರೆಗಿನ ತರಗತಿಗಳು ಪ್ರಾರಂಭಿಸಬೇಕೆಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಸಾಮಾನ್ಯ ಮಾರ್ಗಸೂಚಿ 

ಕಾಲೇಜುಗಳನ್ನು ಸಾನಿಟೈಜ್‌ ಮಾಡುವುದು.
ಬೊಧಕರು ಮತ್ತು ವಿದ್ಯಾರ್ಥಿಗಳಿಗೆ ಕರೋನಾ ಟೆಸ್ಟ ಕಡ್ಡಾಯ ಮಾಡಿಸುವುದು.
ಕಾಲೇಜುಗಳ ಸಮೀಪದ ಪ್ರಾಥಾಮಿಕ ಆರೋಗ್ಯ ಕೇಂದ್ರಗಳಿಗೆ ಮ್ಯಾಪಿಂಗ್‌ ಮಾಡಿಸುವುದು.
ವಿದ್ಯಾರ್ಥಿಗಳು ಮನೆಯಿಂದಲೆ ನೀರು, ಊಟ ತರಬೇಕು
ಉಪನ್ಯಾಸಕರಿಗೆ ಮಾಸ್ಕ್‌ ಮತ್ತು ಪೇಸ್‌ಶಿಲ್ಡ್‌ ಹಾಕಿಕೊಳ್ಳುವುದು.
ಇನ್ನು ಅನೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.



Friday, November 6, 2020

First Plane : ಮೊದಲ ವಿಮಾನವು ರೈಟ್ ಸಹೋದರರಿಂದ ಹಾರಿಸಿದ್ದು ನಿಜವೇ !

 First Plane : ಮೊದಲ ವಿಮಾನವು ರೈಟ್‌ ಸಹೋದರರಿಂದ ಹಾರಿಸಿದ್ದು ನಿಜವೇ !
source : google

ಮೊದಲ ವಿಮಾನವು ರೈಟ್ ಸಹೋದರರಿಂದ ಹಾರಿಸಲ್ಪಟ್ಟಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ, ಆದರೆ ರೈಟ್ ಸಹೋದರರಿಗೆ 8 ವರ್ಷಗಳ ಮೊದಲು, ಒಬ್ಬ ಭಾರತೀಯ ವಿದ್ವಾಂಸನು ಮಾನವರಹಿತ ವಿಮಾನವನ್ನು ಆಕಾಶದಲ್ಲಿ ಹಾರಿಸಿದ್ದಾರೆ ಎಂದು ಜಗತ್ತಿಗೆ ತಿಳಿದಿಲ್ಲ.

ಶಿವಕರ್ ಬಾಪುಜಿ ತಲ್ಪಡೆ 1895 ರಲ್ಲಿ ಮಾನವರಹಿತ ವಿಮಾನ / ವಿಮಾನವನ್ನು ನಿರ್ಮಿಸಿ ಹಾರಾಟ ನಡೆಸಿದ ಭಾರತೀಯ ವಿದ್ವಾಂಸರಾಗಿದ್ದರು. ತಲ್ಪಡೆ 1864 ರಲ್ಲಿ ಮುಂಬೈನ ಚೀರಾ ಬಜಾರ್ ಪ್ರದೇಶದಲ್ಲಿ ಜನಿಸಿದರು. ಅವರು ತಮ್ಮ ಶಿಕ್ಷಕರ ಮೂಲಕ ಪ್ರಾಚೀನ ಭಾರತೀಯ ವೈಮಾನಿಕಶಾಸ್ತ್ರದ ಬಗ್ಗೆ ತಿಳಿದುಕೊಂಡರು.

ತಲ್ಪೇಡ್ ಮಾನವರಹಿತ ವಿಮಾನ / ವಿಮಾನವನ್ನು ರಚಿಸಿದನು, ಅದರಲ್ಲಿ ಅವನು ಮರ್ಕ್ಯುರಿ ಅಯಾನ್ ಅನ್ನು ಇಂಧನವಾಗಿ ಬಳಸಿದರು.ತಲ್ಪೇಡ್‌ನ ವಿಮಾನವನ್ನು ಮಾರುತ್‌ಶಾ ಎಂದು ಹೆಸರಿಸಲಾಯಿತು, ಇದರರ್ಥ 'ಗಾಳಿಯ ಸ್ನೇಹಿತ'. ಎಂದು

1895 ರಲ್ಲಿ, ತಲ್ಪಡೆ ಮುಂಬೈ ಕಡಲತೀರದಲ್ಲಿ ತನ್ನ ವಿಮಾನವನ್ನು ನೂರಾರು ಜನರ ಮುಂದೆ ಪ್ರದರ್ಶಿಸಿದರು. ಈ ಅದ್ಭುತ ಕಾರ್ಯಕ್ರಮದಲ್ಲಿ ಮಹಾದೇವ ಗೋವಿಂದ ರಾನಡೆ ಮತ್ತು ರಾಜ ಸಯಾಜಿ ರಾವ್ ಗಾಯಕವಾಡ್  ರಂತಹ ಪ್ರಸಿದ್ಧ ವ್ಯಕ್ತಿಗಳು ಉಪಸ್ಥಿತರಿದ್ದರು. ಈ ವಿಮಾನವು ಕೆಲವು ನಿಮಿಷಗಳ ಕಾಲ ಹಾರಾಟವನ್ನು ಮುಂದುವರಿಸಿತು. ಇದು ಅಂದಾಜು 1500 ಅಡಿ ಎತ್ತರಕ್ಕೆ ಹಾರಿ ನಂತರ ಭೂಮಿಗೆ ಬೀಳುತ್ತದೆ ".

ತಲ್ಪಡೆ ಅವರ ಪ್ರಯೋಗವನ್ನು ನಿಗ್ರಹಿಸಲು ಬ್ರಿಟಿಷ್ ಸರ್ಕಾರ ಎಲ್ಲವನ್ನೂ ಮಾಡಿತು. ಅವರು ಪಾದರಸದಿಂದ ಸ್ಫೋಟಕಗಳನ್ನು ತಯಾರಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಬ್ರಿಟಿಷ್ ಸರ್ಕಾರ ಅವರನ್ನು ಬಂಧಿಸಿತು. ತಲ್ಪಡೆ ಅನೇಕ ವರ್ಷಗಳ ಕಾಲ ಜೈಲಿನಲ್ಲಿ ಕಳೆದರು. ತಲ್ಪಡೆ 1916 ರಲ್ಲಿ ನಿಧನರಾದರು.

ಪಾದರಸ ಅಯಾನ್ ಎಂಜಿನ್ ಬಳಸಿ ವಿಮಾನ ಹಾರಾಟ ಮಾಡಬಹುದು ಎಂದು ಒಪ್ಪಿಕೊಳ್ಳಲು ಜಗತ್ತು ಸಿದ್ಧವಾಗಿಲ್ಲ. ಅಂತಿಮವಾಗಿ, 21 ನೇ ಶತಮಾನದಲ್ಲಿ ನಾಸಾ ಮರ್ಕ್ಯುರಿ ಅಯಾನ್ ಅನ್ನು ಇಂಧನವಾಗಿ ಯಶಸ್ವಿಯಾಗಿ ಪ್ರದರ್ಶಿಸಿದೆ ಮತ್ತು ಅದನ್ನು ಆಕಾಶನೌಕೆಗಳಲ್ಲಿ ಬಳಸಲು ಹೆಚ್ಚಿನ ಸಂಶೋಧನೆ ಮಾಡಿದೆ.

Thursday, November 5, 2020

SSLC Mathematics Quiz - 4 : ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು

 SSLC Mathematics Quiz - 4 : ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು 


Wednesday, November 4, 2020

SSLC Mathematics Quiz - 3 : ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು

 SSLC Mathematics Quiz -3 : ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು






School Reopening: ಶಾಲೆಗಳ ಪುನಾರಂಭಕ್ಕೆ ಸಿದ್ಧತೆ; ಸರಣಿ ಸಭೆ ನಡೆಸಲು ಮುಂದಾದ ಶಿಕ್ಷಣ ಇಲಾಖೆ

 School Reopening: ಶಾಲೆಗಳ ಪುನಾರಂಭಕ್ಕೆ ಸಿದ್ಧತೆ; ಸರಣಿ ಸಭೆ ನಡೆಸಲು ಮುಂದಾದ ಶಿಕ್ಷಣ ಇಲಾಖೆ


ಶಿಕ್ಷಣ ಇಲಾಖೆ ಈ ಕುರಿತು ಅಧಿಕಾರಿಗಳೊಂದಿಗೆ ನಾಳೆಯಿಂದ ಮೂರು ದಿನಗಳ ಕಾಲ ಸಭೆ ನಡೆಸಲಿದೆ. ಕಳೆದ 18ದಿನಗಳಿಂದ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದೆ. ಈ ಹಿನ್ನಲೆ ಶಾಲೆ ಪುನರ್​ ಆರಂಭ ಕುರಿತು ತಜ್ಞರೊಂದಿಗೆ ಸಭೆ ನಡೆಸಲಿದ್ದಾರೆ.

ಬೆಂಗಳೂರು (ನ.3): ಕೊರೋನಾ ಸಂಕಷ್ಟದ ಸಮಯದಲ್ಲಿ ಶಾಲಾ-ಕಾಲೇಜುಗಳ ಪುನರ್​ಆರಂಭದ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಶಿಕ್ಷಣ ಇಲಾಖೆ ಮಾತ್ರ ಶಾಲೆ ತೆರೆಯುವ ಕುರಿತು ಚಿಂತನೆ ನಡೆಸುತ್ತಲೇ ಇದೆ. ಈಗ  ನೆರೆಯ ರಾಜ್ಯಗಳಲ್ಲಿ  ಶಾಲಾ-ಕಾಲೇಜು ಪುನರ್​ ಆರಂಭವಾಗಿರುವುದು ಇದಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಿದೆ. ಈ ಹಿನ್ನಲೆ ರಾಜ್ಯದಲ್ಲಿ ಕೂಡ ಶಾಲೆ ತೆರೆಯುವ ಕುರಿತು ಚಿಂತನೆ ನಡೆಸಲಾಗಿದೆ. ಈ ಕುರಿತು ಸರಣಿ ಸಭೆ ನಡೆಸಲು ಶಿಕ್ಷಣ ಸಚಿವ ಸುರೇಶ್​ ಕುಮಾರ್​ಮುಂದಾಗಿದ್ದಾರೆ. ಕಳೆದ ಅಕ್ಟೋಬರ್​ನಲ್ಲಿ ಶಾಲೆ ಪುನರ್​ ಆರಂಭ ಕುರಿತು ದಿನಾಂಕ ನಿಗದಿಗೊಳಿಸಲಾಗಿತ್ತು. ಸೋಂಕು ಹೆಚ್ಚಳ ಪ್ರಕರಣ ಜೊತೆ ವಿರೋಧ ವ್ಯಕ್ತವಾದ ಹಿನ್ನಲೆ ಈ ನಿರ್ಧಾರವನ್ನು ಕೈ ಬಿಡಲಾಗಿತ್ತು. ಈಗ ಮತ್ತೆ ಶಾಲೆ ತೆರೆಯುವ ಚಿಂತನೆ ನಡೆದಿದ್ದು ಈ ಸಂಬಂಧ ಇಲಾಖೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ನಾಳೆ ಸಚಿವರು ಸಭೆ ನಡೆಸಲು ಮುಂದಾಗಿದ್ದಾರೆ. ನೆರೆಯ ಆಂಧ್ರದಲ್ಲಿ ಸೋಮವಾರದಿಂದ 9ನೇ ತರಗತಿಯಿಂದ 12ನೇ ತರಗತಿವರೆಗಿನ ಶಾಲೆಗಳ ಪುನರ್​ ಆರಂಭ ನಡೆಸಲಾಗಿದೆ. ಇದರಿಂದ ರಾಜ್ಯಲ್ಲಿ ಕೂಡ ಶಾಲೆ ತೆರೆಯಲೇಬೇಕು ಎಂಬ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ.

ಈ ಹಿಂದೆ ಆದ ರೀತಿ ದಿನಾಂಕ ಪ್ರಕಟಿಸಿ ಮತ್ತೆ ಹಿಂದೆ ಸರಿಯುವುದು ಬೇಡ ಎಂದು ತೀರ್ಮಾನಿಸಿರುವ ಶಿಕ್ಷಣ ಇಲಾಖೆ ಈ ಕುರಿತು ಅಧಿಕಾರಿಗಳೊಂದಿಗೆ ನಾಳೆಯಿಂದ ಮೂರು ದಿನಗಳ ಕಾಲ ಸಭೆ ನಡೆಸಲಿದೆ. ಕಳೆದ 18ದಿನಗಳಿಂದ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದೆ. ಈ ಹಿನ್ನಲೆ ಶಾಲೆ ಪುನರ್​ ಆರಂಭ ಕುರಿತು ತಜ್ಞರೊಂದಿಗೆ ಸಭೆ ನಡೆಸಲಿದ್ದಾರೆ.

 


ಈ ಕುರಿತು ಮಾತನಾಡಿದ ಶಿಕ್ಷಣ ಸಚಿವ ಸುರೇಶ್​ ಕುಮಾರ್​, ಆಂಧ್ರಪ್ರದೇಶದ ಮಾದರಿಯನ್ನು ಗಂಭೀರವಾಗಿ ಅಧ್ಯಯನ ನಡೆಸುತ್ತಿದ್ದೇವೆ. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ವಿದ್ಯಾರ್ಥಿಗಳ ಜೀವನದ ಪ್ರಶ್ನೆ ಇದಾಗಿದೆ. ಈ ಹಿನ್ನಲೆ ಎಲ್ಲಾ ದೃಷ್ಟಿಕೋನದಲ್ಲಿಯೂ ಪರೀಕ್ಷಿಸಲಾಗುವುದು. ರಾಜ್ಯದಲ್ಲಿ ಸೋಂಕಿನ ಪ್ರಮಾಣ ತಗ್ಗಿದ್ದು, ನ.17ರಿಂದ ಕಾಲೇಜು ಪುನರ್​ ಆರಂಭಿಸಲು ಸರ್ಕಾರ ಸಮ್ಮತಿಸಿದೆ ಎಂದರು.

ಶಾಲೆಗಳನ್ನು ಹಂತ ಹಂತವಾಗಿ ತೆರೆಯುವುದು ಉತ್ತಮ ಎಂಬ ಅಭಿಪ್ರಾಯ ತಜ್ಞರಿಂದ ಬಂದಿದೆ. ಆನ್​ಲೈನ್​ನಿಂದಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣ ಪಡೆಯುವುದು ಸಾಧ್ಯವಿಲ್ಲ. ಈ ಹಿನ್ನಲೆ ಇದಕ್ಕೂ ಮುನ್ನ ನಾವು ಮಾಹಿತಿ ಸಂಗ್ರಹಿಸಿ ವಿದ್ಯಾರ್ಥಿ, ಶಿಕ್ಷಕರ ಆರೋಗ್ಯವನ್ನು ಗಮನದಲ್ಲಿರಿಸಿ ಈ ಸಭೆ ನಡೆಸಲಾಗುವುದು ಎಂದರು.

ದೀರ್ಘಕಾಲದವರೆಗೆ ಶಾಲೆಗಳನ್ನು ಮುಚ್ಚಿದರೆ ವಿದ್ಯಾರ್ಥಿಗಳ ಮನಸ್ಸುನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಭಾವಿಸುತ್ತಾರೆ. ಆದ್ದರಿಂದ ಅಂತಿಮ ತೀರ್ಮಾನಕ್ಕೆ ಬರುವ ಮೊದಲು ಎಲ್ಲಾ ವಿಷಯಗಳ ಕುರಿತು ಪರಿಶೀಲಿಸುತ್ತಿದ್ದೇವೆ.

ಈ ಹಿಂದೆ ಅ.11 ರಂದು ಶಾಲೆ ತೆರೆಯುವ ಕುರಿತು ಚರ್ಚೆಗಳು ನಡೆದಿದ್ದವು. ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಕುರಿತು ಚಿಂತನೆ ನಡೆಸಲಾಗಿತ್ತು ಈ ಸಂದರ್ಭದಲ್ಲಿ ಕೋವಿಡ್​ ಪ್ರಕರಣ ಹೆಚ್ಚಾದ ಹಿನ್ನಲೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು, ವಿದ್ಯಾರ್ಥಿ ಮತ್ತು ಮೂರು ವಾರಗಳ ರಜೆ ಘೋಷಿಸಿದರು.

News source : News18kannada